ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.
ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಕೋರ್ಸ್ಗೆ ಫೆಬ್ರವರಿ 2023ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ- ಬಿ.ಇಡಿ. ಪದವಿಯ 4 ನೇ ಸೆಮಿಸ್ಟರ್ನಲ್ಲಿ 100.% ರಷ್ಟು ಫಲಿತಾಂಶ ಪಡೆದಿದೆ.
38 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಂತಿಮ ಸೆಮಿಸ್ಟರ್ನ ಶುಭ ಕೆ.ಜೆ. 91.3 %,
(547) ಅಂಕಗಳನ್ನು ಗಳಿಸಿ ಪ್ರಥಮ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಅನಿಲ್ ಬೋರಯ್ಯ ಎನ್. ಬಿ. 90.6% (544) ಹಾಗೂ ಪ್ರದೀಪ್ ಜಿ. 90.6%
(544) ಅಂಕಗಳಿಸಿ ದ್ವಿತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ ಮತ್ತು ಪಂಕಜ ಎಮ್. 90.1%
(541) ಅಂಕಗಳೊಂದಿಗೆ ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಬಿ.ಇಡಿ. ದ್ವಿತೀಯ ಸೆಮಿಸ್ಟರ್ನಲ್ಲಿ 94% ಫಲಿತಾಂಶ ಪಡೆದಿದೆ. 25 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿ, 06 ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂದುಶ್ರೀ 83.8 (503), ಪ್ರಥಮ ಅತ್ಯುನ್ನತ ಶ್ರೇಣಿ, ಪ್ರೇಮ ಆರ್ 83.5% (501) ದ್ವಿತೀಯ ಅತ್ಯುನ್ನತ ಶ್ರೇಣಿ ಹಾಗೂ ರೇಖಾ ಆರ್ 81.6% (490) ಮತ್ತು ಸ್ವರ್ಣಗೌರಿ 81.6% (490) ಅಂಕಗಳೊಂದಿಗೆ ತೃತೀಯ ಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನಂದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ ಗಿರೀಶ್ ಹಾಗೂ ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು.
No comments:
Post a Comment