Sunday, 16 December 2018


S.S.K.S. COLLEGE OF EDUCATION, CHITRADURGA  

 Farewell party of B.Ed students -2017-18

15-12-2018

         “¢éwÃAiÀÄ ªÀµÀðzÀ ©.Er. ¥Àæ²PÀëuÁyðUÀ½UÉ ¸ÀªÀiÁgÉÆÃ¥À ¸ÀªÀiÁgÀA¨sÀ ºÁUÀÆ ¥ÀæweÁÕ«¢ü” PÁAiÀÄðPÀæªÀÄ 







²æà ¸ÀzÀÄÎgÀÄ ²ªÀ°AUÁ£ÀAzÀ ¸Áé«ÄfAiÀĪÀgÀÄ, ²æà ¸ÀzÀÄÎgÀÄ PÀ©ÃgÁ£ÀAzÀ D±ÀæªÀÄ avÀæzÀÄUÀð.


qÁ. C£ÀAvÀgÁªÀiï, rãÀgÀÄ, ²PÀët CzsÀåAiÀÄ£À «¨sÁUÀ zÁªÀtUÉgÉ «±Àé«zÁå®AiÀÄ 

                   ²æà ¤gÀAd£ÀªÀÄÆwð ¥ÁæA±ÀÄ¥Á®gÀÄ, J¸ï.J¸ï.PÉ.J¸ï. r.¦.Er. PÁ¯ÉÃeï


²æêÀÄw C¤vÀ, ¥ÁæA±ÀÄ¥Á®gÀÄ, J¸ï.J¸ï.PÉ.J¸ï. £À¹ðAUï PÁ¯ÉÃeï. 



ಉತ್ತಮ ಸಮಾಜದ ನಿರ್ಮಾತೃ ಶಿಕ್ಷಕ ” -ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು


ಸಮಾಜದಲ್ಲಿ ಶಿಕ್ಷಕ ನಿಜವಾದ ಮಾತೃ ಸ್ಥಾನದಲ್ಲಿದ್ದಾನೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಷಯ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನೆ ಅನುಕರಣೆ ಮಾಡುವುದು ಸಹಜವಾದುದು, ಹಾಗಾಗಿ ಶಿಕ್ಷಕರು ಉತ್ತಮ ರೂಢಿಗಳನ್ನು ಮಕ್ಕಳಿಗೆ ರೂಢಿಸವುದು ಅಗತ್ಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಕನೆ ಪ್ರಮುಖ ಪಾತ್ರವಹಿಸುವವನಾಗಿದ್ದು, ಶಿಕ್ಷಕ ನಿಜವಾದ ದೇಶ ನಿರ್ಮಾತೃವಾಗಿದ್ದಾನೆ. ವಿದ್ಯಾರ್ಥಿಗಳನ್ನು ಉತ್ತಮ ಜ್ಞಾನವಂತರನ್ನಾಗಿ ಮಾಡುವುದರೊಂದಿಗೆ ಉತ್ತಮ ನಾಗರೀಕ ಗುಣಗಳನ್ನು ಬೆಳೆಸಬೇಕು ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದದ್ವಿತೀಯ ವರ್ಷದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸಮಾರೋಪ ಸಮಾರಂಭ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ  ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಶಿಕ್ಷಕನ ಕೆಲಸ ಪ್ರತಿ ಮಗುವಿಗೂ ಜೀವನದ ಬೆಳಕನ್ನು ಬೆಳಗಿಸುವ ಕಾರ್ಯ. ತಾನು ಕಲಿತ ಜ್ಞಾನವನ್ನು ಮಕ್ಕಳಿಗೆ ಕಲಿಸುವ ಮೂಲಕ ಜ್ಞಾನಜ್ಯೋತಿಯನ್ನು ಬೆಳಗಿಸುವಂತಾಗಬೇಕು. ಪ್ರತಿ ವಿದ್ಯಾರ್ಥಿಯ ಕಲಿಕೆ ಸಮಸ್ಯೆಯನ್ನು ಪರಿಹರಿಸಿ ಜೀವನಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳೊಂದಿಗೆ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಎಂದು ಸ್ವಾಮಿಜಿಯವರು ಹಾರೈಸಿದರು.
ಮುಖ್ಯ ಅತಿಥಿಕಾಗಿದ್ದ ಡಾ. ಅನಂತರಾಮ್, ಡೀನರು, ಶಿಕ್ಷಣ ಅಧ್ಯಯನ ವಿಭಾಗ ದಾವಣಗೆರೆ ವಿಶ್ವವಿದ್ಯಾಲಯ ಇವರು ಮಾತನಾಡಿ, ಶಿಕ್ಷಕನ ಕೆಲಸ ಕಲಿಕೆಯನ್ನು ವರ್ಗಾಹಿಸುವುದಲ್ಲ ಬದಲಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನ ಅನ್ವೇಷಣೆಯ ಕೌಶಲ ಬೆಳೆಸುವುದು. ಶಿಕ್ಷಕನ ಬೋಧನೆ ಯಾಂತ್ರಿಕ ಬೋಧನೆಯಾಗಬಾರದು. ಕಲಿಕೆ ಜೀವಂತ ಅನುಭವಗಳನ್ನು ನೀಡಬೇಕೆಂದರೆ ಶಿಕ್ಷಕಕು ಪ್ರತಿನಿತ್ಯದ ತರಗತಿಗೆ ಪೂರ್ಣಸಿದ್ದತೆಯೊಂದಿಗೆ ಪಾಠ ಬೋಧನೆಯಲ್ಲಿ ತೊಡಗಬೇಕು. ಶಿಕ್ಷಕ ಕೇವಲ ಪಠ್ಯಪೂರ್ಣಗೊಳಿಸಲು ಮಾತ್ರ ಒತ್ತು ಕೊಡಬಾರದು. ವಿದ್ಯಾರ್ಥಿ ಏನನ್ನು ಕಲಿತಿದ್ದಾನೆ, ಎಷ್ಟು ಕಲಿತಿದ್ದಾನೆ ಎಂಬ ಮನವರಿಕೆಯೊಂದಿಗೆ ಎಲ್ಲ ವಿದ್ಯಾರ್ಥಿಗಳ ಕಡೆ ಗಮನಹರಿಸಬೇಕು. ಶಿಕ್ಷಕರಿಗೆ ವೃತ್ತಿ ಬದ್ಧತೆ ಬಹಳ ಮುಖ್ಯವಾದುದು, ಎಲ್ಲಿ ವೃತ್ತಿಬದ್ದತೆ ಪೂರ್ಣಪ್ರಮಾಣದಲ್ಲಿರುತ್ತದೊ ಅಲ್ಲಿ ವಿದ್ಯಾರ್ಥಿಗಳ ಯಶಸ್ಸು ದೊರೆಯುತ್ತದೆ. ವಿದ್ಯಾಥಿಗಳನ್ನು ಹೆಚ್ಚು ಗೊಂದಲಗಳಿಗೆ ಸಿಲುಕಿಸದೆ, ಕಲಿಕೆಗೆ ಸದಾ ಪ್ರೇರಣೆಯ ಚಟುವಟಿಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳನ್ನು ಅಂಕ ಗಳಿಕೆಗೆ ಸಿದ್ಧ ಮಾಡುವುದನ್ನು ಬಿಟ್ಟು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡುವ ಕಾರ್ಯ ಮಾಡಬೇಕಿದೆ. ಶಿಕ್ಷಕರು ಸಮಾಜದ ಸುತ್ತಮುತ್ತಲ ಪರಿಸರದ ವಾಸ್ತವತೆಯ ಜ್ಞಾನವನ್ನು ನೀಡಬೇಕು. ಶಿಕ್ಷಕರು ಜೀವನ ಕೌಶಲ್ಯವನ್ನು ಹಾಗೂ ಗೌರವದ ಮೌಲ್ಯಗಳನ್ನು ಕಲಿಸಬೇಕಾಗಿದೆ. ಇಂತಹ ಜ್ಞಾನ, ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು.

ಮತ್ತೊರ್ವ ಮುಖ್ಯ ಅತಿಥಿಗಳಾದ ಶ್ರೀ ನಿರಂಜನಮೂರ್ತಿ ಪ್ರಾಂಶುಪಾಲರು, ಎಸ್.ಎಸ್.ಕೆ.ಎಸ್. ಡಿ.ಪಿ.ಇಡಿ. ಕಾಲೇಜಿನ ಇವರು ಮಾತನಾಡಿ ಶಿಕ್ಷಕರು ಸದಾ ಅಧ್ಯಯನದಲ್ಲಿ ತೊಡಿದಾಗ ಉತ್ತಮ ಬೋಧನೆಗೆ ಸಹಕಾರಿಯಾಗುವುದು. ಮಕ್ಕಳಿಗೆ  ಕೇವಲ ಪರೀಕ್ಷಾ ದೃಷ್ಟಿಯಿಂದ ಬೋಧಿಸುವುದು ಬಿಡಬೇಕು, ಮಕ್ಕು ಜ್ಞಾನವನ್ನು ಚಿಂತಿಸುವ, ಆಲೋಚಿಸುವ ಹಾಗೂ ಜೀವನದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರು ಸ್ವಾರ್ಥರಹಿತ, ಸ್ವಜನ ಪಕ್ಷಪಾತ ಇಂತಹ ಗುಣಗಳಿಂದ ಮುಕ್ತರಾಗಿ ವಿದ್ಯಾರ್ಥಿಗಳಿಗೆ ಆದರ್ಶವಾದ ಅನುಕರನೀಯ ವ್ಯಕ್ತಿತ ಗುಣವಳನ್ನು ರೂಢಿಸಿಕೊಳ್ಳಬೇಕೆಂದುಎಸ್.ಎಸ್.ಕೆ.ಎಸ್ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದಡಾ. ಗಿರೀಶ್ ಟಿ ವಹಿಸಿ ತರಬೇತಿಯ ಅವಧಿಯಲ್ಲಿ ಕಲಿತ ಜ್ಞಾನ ಮತ್ತು ಬೋಧನಾ ಕೌಶಲಗಳನ್ನು ತರಗತಿಯಲ್ಲಿ ಅಳವಡಿಸಿಕೊಂಡು ಉತ್ತಮವಾಗಿ ಬೋಧಿಸುವಂತೆ ತಿಳಿಸಿದರು. ಉಪನ್ಯಾಸಕರಾದ ಶ್ರೀಮತಿ ರೂಪ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಕ ವೃತ್ತಿಯ ಮಹತ್ವ ಮತ್ತು ಶಿಕ್ಷಕರಾಗಿ ನಮ್ಮಗಳ ಪಾತ್ರವೆನಂಬುದನ್ನು ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀ ವಿಜಯ್ ಕುಮಾರ್, ಶ್ರೀಮತಿ ಉಷಾ, ಶ್ರೀಪ್ರಶಾಂತ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರುಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳು ಸ್ನೇಹದ ಸಂಕೇತವಾಗಿ ನೆನಪಿನಕಾಣಿಕೆ ಕೊಟ್ಟು ಬೀಳ್ಕೊಟ್ಟರು.



¢éwÃAiÀÄ ªÀµÀðzÀ ¥Àæ²PÀëuÁyðUÀ½UÉ ¥ÀæxÀªÀÄ ªÀµÀðzÀ ©.Er. ¥Àæ²PÀëuÁyðUÀ½AzÀ ¸ÉßúÀzÀ ¸ÀAPÉÃvÀªÁV £É£À¦£ÀPÁtÂPÉ «vÀgÀuÉ 

“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ್ಯ ಹೋರಾಟಗಾರ, ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾ ಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ  ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಅಬುಲ್ ಕಲಾಂ ಆಜಾದ್ ರವರು ಮಹಾತ್ಮ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿ ಭಾರತ ಸ್ವತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರು. ಅತ್ಯುತ್ತಮ ಬರಹಗಾರರಾದ ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆದ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಸ್ವತಂತ್ರ್ಯ ಹೋರಾಟದಲ್ಲಿ ಹಲವುಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್‍ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಜೀವನಪೂರ್ಣ ಹಿಂದೂ-ಮುಸ್ಲಿಂರ ಐಕ್ಯತೆಗಾಗಿ ಶ್ರಮಿಸಿದ ಅಪ್ಪಟ ಭಾರತೀಯ. ದೇಶ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು. ಸ್ವತಂತ್ರ್ಯ ಭಾರತದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣದಲ್ಲಿ ಅಮೂಲಾಗ್ರ ಕಾರ್ಯಗಳನ್ನು ಮಾಡಿದವರು. ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದವರು. ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ಕಲಾಂರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ. ಅಬುಲ್ ಕಲಾಂ ಆಜಾದ್‍ರಂತಹ ನಾಯಕರ ವಿಚಾರಗಳನ್ನು ಎಲ್ಲಿಯೂ ಓದಲು ಅವಕಾಶವಿಲ್ಲದ ಪರಿಣಾಮವಾಗಿ ಅವರ ಬಗ್ಗೆ ತಿಳಿಯುವಲ್ಲಿ ಅವಕಾಶವಂಚಿತರಾಗುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಕರೆನೀಡಿದರು. 
ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ ಮತ್ತು ಶ್ರೀಮತಿ ರೂಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ರಂಗಸ್ವಾಮಿ ನಿರೂಪಿಸಿದರು, ಚಂದ್ರಮ್ಮ ಪ್ರಾರ್ಥಸಿದರು, ದಿಲೀಪ್ ಸ್ವಾಗತಿಸಿದರು, ದಿವ್ಯ ವಂದಿಸಿದರು. 




Tuesday, 2 October 2018




Citizenship Training Camp for B.Ed students on 30-11-2018 to 02-12-2018



“¥ËgÀvÀé vÀgÀ¨ÉÃw ²©gÀ”



News Paper Reports 



ಪೌರತ್ವ ತರಬೇತಿ ಶಿಬಿರ
ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಗುಣಾತ್ಮಕ ಶಿಕ್ಷಣ ಅತೀ ಅಗತ್ಯವಾದುದು. ಶಿಕ್ಷಣದ ಉದ್ದೇಶ ಉತ್ತಮ ನಾಗರೀಕರ ನಿರ್ಮಾಣದೊಂದಿಗೆ ಉತ್ತಮ ಸಮಾಜ ಕಟ್ಟುವುದಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅವಧಿಯಲ್ಲಿಯೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ. ಹಾಗಾಗಿ ಶಿಕ್ಷಕರಿಗೆ, ಶಿಕ್ಷಕ ತರಬೇತಿ ಪಡೆಯುತ್ತಿರುವವರಿಗೆ ಆಂತರಿಕ ಸ್ವಚ್ಚತೆಯೊಂದಿಗೆ ಬಾಹ್ಯ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಶಿಕ್ಷಣ ಮತ್ತು ತರಬೇತಿ ಅಗತ್ಯವಾಗಿದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಾಗುವವರಿಗೆ ವಿಷಯಜ್ಞಾನದೊಂದಿಗೆ ಸಮಾಜದ, ಸುತ್ತಮುತ್ತಲ ಪರಿಸರದ ವಾಸ್ತವತೆಯ ಜ್ಞಾನವನ್ನು ನೀಡಬೇಕು. ಶಿಕ್ಷಕರು ಮಕ್ಕಳಿಗೆ ಜ್ಞಾನದೊಂದಿಗೆ ಜೀವನ ಕೌಶಲ್ಯವನ್ನು ಹಾಗೂ ಮೌಲ್ಯಗಳನ್ನು ಕಲಿಸಬೇಕಾಗಿರುವುದರಿಂದ ಸಮಾಜವನ್ನು ಅರ್ಥಮಾಡಿಕೊಳ್ಳುವ ಸಮಾಜದೊಂದಿಗೆ ಬೆರೆತು ಜೀವಿಸುವ ರೂಢಿಯನ್ನು ಬೆಳೆಸಬೇಕುಮಕ್ಕಳು ಶಿಕ್ಷಕರನ್ನು ಅನುಸರಿಸಿ ಕಲಿಯುವುದರಿಂದ ಶಿಕ್ಷಕರು ಮಕ್ಕಳಿಗೆ ಆದರ್ಶವಾದ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು. ಶಿಕ್ಷಕರಾಗುವಂತವರಿಗೆ ಜೀವನ ಮೌಲ್ಯವನ್ನು ಬೆಳೆಸುವ ಇಂತಹಪೌರತ್ವ ತರಬೇತಿ ಶಿಬಿರಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯವಾಗಿದೆ. ಶಿಬಿರಾರ್ಥಿಗಳಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಕರೆನೀಡಿದರು.
ಪೌರತ್ವ ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾದ ಡಾ. ವಿ ಬಸವರಾಜು, ಪ್ರಾಧ್ಯಾಪಕರು ಮಹರಾಜ ಮದಕರಿ ನಾಯಕ ಪ್ರಥಮದರ್ಜೆ ಕಾಲೇಜು ಇವರು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನದ ಮಹತ್ವವನ್ನು ತಿಳಿಸಿದರು. ಮನಸ್ಸಿನ ಪರಿಶುದ್ಧತೆಗೆ, ಉತ್ತಮ ವ್ಯಕ್ತಿತ್ವ ವೃದ್ಧಿಗೆ ಹಾಗೂ ಜೀವನದ ಸಾರ್ಥಕತೆಗೆ  ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸೌರ್ಹಾರ್ಧ ಕಲಿಕೆಯ ಪರಿಸರವನ್ನು ಒದಗಿಸುವುದು. ಬಹುತ್ವ ಸಂಸ್ಕøತಿಯ ದೇಶವಾದ ಭಾರತಕ್ಕೆ ಎಲ್ಲ ಧರ್ಮವನ್ನು, ಸಂಸ್ಕøತಿಯನ್ನು, ಸಮುದಾಯವನ್ನು ಗೌರವಿಸುವ ಮನಸ್ಸುಗಳ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
 ‘ಎಸ್.ಎಸ್.ಕೆ.ಎಸ್ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗಿರೀಶ್ ಟಿ ಅಧ್ಯಕ್ಷತೆವಹಿಸಿದ್ದರು, ಡಿ ಪಿ ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಿರಂಜನಮೂರ್ತಿಯವರು ಹಾಗೂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕರಾದ ಶ್ರೀಮತಿ ರೂಪ ಶಿಬಿರದ ಪ್ರಾಸ್ತವಿಕತೆಯನ್ನು ತಿಳಿಸಿದರು, ಶಿಬಿರಾಧಿಕಾರಿಯಾದ ಶ್ರೀ ವಿಜಯ್ ಕುಮಾರ್, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀಮತಿ ಉಷಾ, ಶ್ರೀಪ್ರಶಾಂತ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು

                


Birthday Celebration of Mahatma Gandhi & Lal Bahadur Shastri 
on October 2, 2018.



 



 




ಕಾರ್ಯಕ್ರಮದ ವರದಿ:

ಭಾರತ ಸ್ವಾತಂತ್ರ್ಯದ ನೇತಾರರಾದ ಗಾಂಧೀಜಿಯವರು, ಅಹಿಂಸಾ ಮಾರ್ಗದ ಮೂಲಕವೆ ಶತೃಗಳನ್ನು ಹಿಮ್ಮೆಟ್ಟಿಸಿದ ಮಹಾನ್ ನಾಯಕ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಕಲ ಸೌಲತ್ತುಗಳನ್ನು ತ್ಯಜಿಸಿ ಸಾಮಾನ್ಯ ಮನುಷ್ಯರಂತೆ ಜನರೊಂದಿಗೆ ಬದುಕಿದ ಆದರ್ಶ ವ್ಯಕ್ತಿ. ಸಿರಿವಂತಿಕೆಯ ಸೂಟುಬೂಟಿನ ಉಡುಗೆ ತೊಡುಗೆಯನ್ನು ತ್ಯಜಿಸಿ ಅಲ್ಪ ಉಡುಪನ್ನು ಧರಿಸಿ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದವರು. ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದ ಗಾಂಧೀಜಿ. ಭಾರತೀಯ ಪ್ರಜೆಗಳಿಗೆ ಸ್ವಾವಲಂಭಿ ಜೀವನ-ಸ್ವದೇಶಿ ಜೀವನ ಶೈಲಿಗೆ ಕರೆ ನೀಡಿದರು. ತಾನು ಸರಳ ಜೀವನವನ್ನು ಅಳವಡಿಸಿಕೊಂಡು ಸಮಾಜಕ್ಕೆ ಅತ್ಯಂತ ಸರಳ ಜೀವನದ ಮಾರ್ಗವನ್ನು ತೋರಿಸಿದ ಆದರ್ಶ ವ್ಯಕ್ತಿತ್ವದವರು. ಹಾಗಾಗಿ ಗಾಂಧೀಜಿಯವರನ್ನು ಕೇವಲ ವ್ಯಕ್ತಿಯಾಗಿ ಆರಾಧಿಸದೆ ವ್ಯಕ್ತಿತ್ವದ ಆರಾಧನೆಯಾಗಬೇಕು. ಇದರಿಂದಾಗಿ ಯುವ ಸಮುದಾಯ ರಾಷ್ಟ್ರೀಯ ನಾಯಕರ ನೈಜವಾದ ಮೌಲ್ಯಗಳನ್ನು ತಿಳಿಯಲು ಸಾಧ್ಯ ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ ‘ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ರವರು ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜು ಹಾಗೂ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ನರ್ಸಿಂಗ್ ಕಾಲೇಜಿನ  ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ “ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಶವನ್ನಾಳಿದ ಪ್ರಧಾನಿಯಲ್ಲಿ ಪ್ರಮುಖರಾದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ತನ್ನ ಆಡಳಿತ ಮೂಲಕವೆ ಶತೃ ರಾಷ್ಟ್ರಗಳಿಗೆ ಚಾಟಿ ಬೀಸಿದ ದಕ್ಷ ಆಡಳಿತಗಾರ. ಇವರಿಗೆ ದೇಶದ ಸೈನಿಕ ಮತ್ತು ರೈತರೆಂದರೆ ಅಪಾರವಾದ ಗೌರವ ಮತ್ತು ಪ್ರೀತಿ, ಆದುದರಿಂದಲೇ “ಜೈಜವಾನ್-ಜೈಕೀಸಾನ್” ಎಂಬ ಘೋಷಣೆ ಮೊಳಗಿಸಿದರು. ತನ್ನ ಆಡಳಿತದುದ್ದಕ್ಕೂ ಎಲ್ಲಿಯೂ ಯಾವುದೇ ಕಳಂಕವಿಲ್ಲದೆ ಪ್ರಾಮಾಣಿಕ, ದಕ್ಷ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಶಾಸ್ತ್ರೀಜಿಯವರ ಆದರ್ಶ ನಾಯಕತ್ವ ಪ್ರಸ್ತುತ ನಾಯಕರು ಅನುಸರಿಸುವಂತಾಗಬೇಕು. ಪೊಳ್ಳು ಬರವಸೆಗಳನ್ನು ನೀಡುವ ಪ್ರೌವೃತ್ತಿಯ ಬಿಟ್ಟು ಇಂತಹ ಮಹಾನ್ ನಾಯಕರ ವ್ಯಕ್ತಿತ್ವ ಗುಣವನ್ನು ಅಳವಡಿಸಿಕೊಳ್ಳಬೇಕು.

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಸ್ತ್ರೀ ಶಿಕ್ಷಣ, ಮೂಲ ಶಿಕ್ಷಣ, ಮಾತೃಭಾಷಾ ಶಿಕ್ಷಣಕ್ಕೆ ಒತ್ತು, ಅಸ್ಪೃಶ್ಯತೆಯ ನಿವಾರಣೆ, ಸ್ವರಾಜ್ಯ ಚಿಂತನೆ ಹೀಗೆ ಹಲವು ಪರಿಹಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ. ವಿದೇಶಗಳಿಗೆ ಅವಲಂಭಿಯಾಗದೆ ಸ್ವದೇಶಿ ಉತ್ಪಾದನೆಯನ್ನು ಗಾಂಧೀಜಿಯವರು ಒತ್ತು ನೀಡಿದ್ದರು. ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಕಟ್ಟಬಯಸಿದ ದೇಶಕ್ಕೆ ಭಾರತ ಸಂವಿಧಾನ ಬಹುದೊಡ್ಡ  ಅಡಿಪಾಯವಾಗಿದೆ. ಆಳುವ ಸರ್ಕಾರಗಳು ಸಂವಿಧಾನಾತ್ಮಕವಾಗಿ ಪ್ರತಿ ಜನತೆಗೆ ದೊರಕಬೇಕಾದ ಸಮಾನ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟರೆ ದೇಶಕ್ಕಾಗಿ ಶ್ರಮಿಸಿದ ನಾಯಕರಿಗೆ ನೀಡುವ ಗೌರವವಾಗುತ್ತದೆ. ಪ್ರಸ್ತುತ ಗಾಂಧೀಜಿಯವರ ವ್ಯಕ್ತಿ ಆರಾಧನೆಗೆ ಮಾತ್ರ ಒತ್ತು ಕೊಡಲಾಗುತ್ತಿದೆ. ನಿಜವಾದ ಗಾಂಧೀ ನಮ್ಮಿಂದ ಮಾಯವಾಗುತ್ತಿದ್ದಾರೆ, ಹಾಗಾಗಿ ಗಾಂಧೀಜಿಯವರ ನೈಜ ಚಿಂತನೆಗಳನ್ನು ಇಂದಿನ ಯುವ ಪೀಳಿಗೆಯಲ್ಲಿ ಬೆಳೆಸುವಂತಹ ಅಗತ್ಯತೆ ಎದ್ದು ಕಾಣುತ್ತಿದೆ ಎಂದು ಡಾ. ಗಿರೀಶ್ ರವರು ಅಭಿಪ್ರಾಯಪಟ್ಟರು.  

ಉಪನ್ಯಾಕಿಯಾದ ಶ್ರೀಮತಿ ರೂಪರವರು ಮಾತನಾಡಿ ಗಾಂಧೀಜಿಯವರ ಆದರ್ಶ ತತ್ವಗಳಾದ ಸತ್ಯ, ಅಹಿಂಸೆ, ಶಾಂತಿ ಪಾಲನೆಯಲ್ಲಿ ಪ್ರಸ್ತುತ ನಮ್ಮಗಳ ಪಾತ್ರವನ್ನು ನಾವು ನಿರ್ವಹಿಸಬೇಕು, ಅದು ದೇಶದ ಪ್ರಜೆಗಳಾದ ನಮ್ಮೇಲ್ಲರ ಕರ್ತವ್ಯವೆಂದು ಭಾವಿಸಿಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ದೃಢನಿರ್ಧಾರದಿಂದ ಸಾಧನೆ ದಾರಿಯನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಮಾತನಾಡಿ ಸರಳತೆಯ ಜೀವನ ಶೈಲಿ ನಮ್ಮನ್ನ ಎತ್ತರಕ್ಕೆ ಬೆಳೆಸುವ ದಾರಿಯಾಗಿದೆ, ಹಾಗಾಗಿ ವಿದ್ಯಾರ್ಥಿಗಳು ಸರಳತೆಯನ್ನು ರೂಢಿಸಿಕೊಳ್ಳಲು ಕರೆನೀಡಿದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಅಶ್ವಿನಿ ನಿರೂಪಿಸಿದರು, ಗುರುಸ್ವಾಮಿ ಪ್ರಾರ್ಥಿಸಿದರು, ನಾಗೇಂದ್ರ ಸ್ವಾಗತಿಸಿದರು, ಕಾವ್ಯ ವಂದಿಸಿದರು. ನರ್ಸಿಂಗ್ ಮತ್ತು ಬಿ.ಇಡಿ.ಕಾಲೇಜಿನ ವಿದ್ಯಾರ್ಥಿಗಳು,ಉಪನ್ಯಾಸಕರು ಹಾಗೂ ಸಿಬ್ಬಂದ್ಧಿ ವರ್ಗದವರು ಉಪಸ್ಥಿತರಿದ್ದರು. 



Celebration of Teachers Day on 5th September -2018











 Independence Day celebration on 15th  August 2018 










Wednesday, 18 April 2018


Sri Sadguru Kabeerananda Swamy Vidya Peeta (R) Chitrdurga.

SSKS College of Education Chitradurga 


Student Union -2018 Inaugural function 

and 

Welcome for I year B.Ed student -teachers. 




Inaugural by  Dr. Jagannath K Dange, Kuvempu University 

 Chief Guest- Shri Basavarajappa A. G. syndicate member DVG University



Shri Niranjanmurthy C L, Principal SSKS D.P.Ed.  College.

Girish T, Principal SSKS College of Education  

Prashanth Kumar C, Principal SSKS PU College




Student Union -2018 




 Cultural Programme 





ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...