Thursday, 25 January 2024

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

 ಫಲಿತಾಂಶ ಪ್ರಕಟಣೆ 2024

ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ-ಬಿ.ಇಡಿ. ಪದವಿಯ 4ನೇ ಸೆಮಿಸ್ಟರ್‌ನಲ್ಲಿ 100.%ರಷ್ಟು ಫಲಿತಾಂಶ ಪಡೆದಿದೆ. 32 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂದುಶ್ರೀ ಜಿ. ಆರ್. 551, (92%) ಅಂಕಗಳಿಸಿ ಪ್ರಥಮ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಪ್ರೇಮ ಆರ್ 536 (89.5%,) ಅಂಕಗಳಿಸಿ ದ್ವಿತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಹಾಗೂ ಪ್ರಶಾಂತ್ ಈ, 529 (88.3%) ಪಡೆದಿದ್ದಾರೆ ಅಂಕಗಳಿಸಿ ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

          ಬಿ.ಇಡಿ. 2ನೇ ಸೆಮಿಸ್ಟರ್‌ನಲ್ಲಿ 35 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿ, 06 ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚಿರಂಜೀವಿ 516 (86%) ಪಡೆದು ಪ್ರಥಮ ಅತ್ಯುನ್ನತ ಶ್ರೇಣಿ, ಶಬರಿ ಕೆ. ಯು. 499 (83.2%), ಅಂಕಗಳನ್ನು ದ್ವಿತೀಯ ಅತ್ಯುನ್ನತ ಶ್ರೇಣಿ ಹಾಗೂ ಅರ್ಪೀತ ಜಿ 492 (82%) ಅಂಕಗಳೊಂದಿಗೆ ತೃತೀಯ ಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನಂದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ. ಗಿರೀಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು 





Sunday, 19 March 2023

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.ಬಿ.ಇಡಿ. ಫಲಿತಾಂಶ-2023

 ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.


ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಕೋರ್ಸ್ಗೆ  ಫೆಬ್ರವರಿ 2023ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ- ಬಿ.ಇಡಿ. ಪದವಿಯ 4 ನೇ ಸೆಮಿಸ್ಟರ್ನಲ್ಲಿ 100.% ರಷ್ಟು ಫಲಿತಾಂಶ ಪಡೆದಿದೆ

38 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಂತಿಮ ಸೆಮಿಸ್ಟರ್ ಶುಭ ಕೆ.ಜೆ. 91.3 %, (547) ಅಂಕಗಳನ್ನು ಗಳಿಸಿ ಪ್ರಥಮ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಅನಿಲ್ ಬೋರಯ್ಯ ಎನ್. ಬಿ. 90.6% (544) ಹಾಗೂ ಪ್ರದೀಪ್ ಜಿ. 90.6% (544)  ಅಂಕಗಳಿಸಿ ದ್ವಿತೀಯ  ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ ಮತ್ತು ಪಂಕಜ ಎಮ್. 90.1% (541) ಅಂಕಗಳೊಂದಿಗೆ ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

 

ಬಿ.ಇಡಿ. ದ್ವಿತೀಯ ಸೆಮಿಸ್ಟರ್ನಲ್ಲಿ 94% ಫಲಿತಾಂಶ ಪಡೆದಿದೆ. 25 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿ, 06 ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂದುಶ್ರೀ 83.8 (503), ಪ್ರಥಮ ಅತ್ಯುನ್ನತ ಶ್ರೇಣಿಪ್ರೇಮ ಆರ್ 83.5% (501) ದ್ವಿತೀಯ ಅತ್ಯುನ್ನತ ಶ್ರೇಣಿ ಹಾಗೂ ರೇಖಾ ಆರ್ 81.6% (490) ಮತ್ತು ಸ್ವರ್ಣಗೌರಿ 81.6% (490) ಅಂಕಗಳೊಂದಿಗೆ ತೃತೀಯ ಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನಂದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ ಗಿರೀಶ್ ಹಾಗೂ ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು.   

Saturday, 24 September 2022

 

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

 

        ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಕೋರ್ಸ್ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ. ತೃತೀಯ (3ನೇ ಸೆಮಿಸ್ಟರ್) ಸೆಮಿಸ್ಟರ್ನಲ್ಲಿ 98% ರಷ್ಟು ಫಲಿತಾಂಶ ಪಡೆದಿದೆ. 35 ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿ, 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ತೃತೀಯ ಸೆಮಿಸ್ಟರ್ ಶುಭ ಕೆ.ಜೆ. 85% (510) ಅಂಕಗಳನ್ನು ಗಳಿಸಿ ಪ್ರಥಮ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಅನಿಲ್ ಬೋರಯ್ಯ ಎನ್. ಬಿ. 84.33% (506)  ಅಂಕಗಳನ್ನು ಗಳಿಸಿ ದ್ವಿತೀಯ  ಅತ್ಯುನ್ನತ ಶ್ರೇಣಿ ಹಾಗೂ  ಪ್ರದೀಪ್ ಜಿ. 83.67% (502) ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನAದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ ಗಿರೀಶ್ ಹಾಗೂ ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು.




Wednesday, 6 April 2022

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯ ಚಿತ್ರದುರ್ಗ-2022

 


ಬಿ.ಇಡಿ. 4ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ-2022

 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಕೋರ್ಸ್   ಅಂತಿಮ (೪ನೇ) ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯವು ಬಿ.ಇಡಿ. ಅಂತಿಮ (ನಾಲ್ಕನೆ) ಸೆಮಿಸ್ಟರ್ನಲ್ಲಿ  100% ರಷ್ಟು ಫಲಿತಾಂಶ ಪಡೆದಿದೆ, ನಾಲ್ಕನೇ ಸೆಮಿಸ್ಟರ್ ಅರ್ಫೀನ್ ತಾಜ್ ಪ್ರಥಮ ಅತ್ಯುನ್ನತ ಶ್ರೇಣಿ 89.16 % (535) ಪಡೆದಿದ್ದಾರೆ



ಜಗದೀಶ್ ಕೆ 88.5% (531) ದ್ವಿತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ



ಹಾಗೂ ತೃತೀಯ ಅತ್ಯುನ್ನತ ಶ್ರೇಣಿ ಯಶವಂತ್ ಕುಮಾರ್ ಡಿ, 87.75% (526) ಪಡೆದಿದ್ದಾರೆ


 ಪೂಜಾ ಎಮ್ ಯಾದವ್ 87.5 % (525) ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ


 ಒಟ್ಟು ಬಿ.ಇಡಿ. ಕೋರ್ಸ್  39 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉತ್ತಮ ಫಲಿತಾಂಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನAದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ ಗಿರೀಶ್ ಹಾಗೂ ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು.

Thursday, 11 November 2021

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ - ರಾಷ್ಟ್ರೀಯ ಶಿಕ್ಷಣ ದಿನಾಚರಣೆ

 ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ. 


ದಿನಾಂಕ: 11-11-2021

“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ್ಯ ಹೋರಾಟಗಾರರೂ ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವಾದ ನವೆಂಬರ್ 11 ರಂದು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ಯವರು ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


        ಭಾರತ ಸ್ವತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿದ್ದವರು ‘ಅಬುಲ್ ಕಲಾಂ ಆಜಾದ್‍ರವರು’. ಅತ್ಯುತ್ತಮ ಬರಹಗಾರರಾದ ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆಯ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಸ್ವತಂತ್ರ್ಯ ಹೋರಾಟದಲ್ಲಿ ಹಲವುಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್‍ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಇವರು ತನ್ನ ಜೀವನಪೂರ್ಣ ಹಿಂದೂ-ಮುಸ್ಲಿಂರ ಐಕ್ಯತೆಗಾಗಿ, ಐಕ್ಯತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಅಪ್ಪಟ ಭಾರತೀಯ. ಭಾರತದೇಶ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು.ಜ್ಯಾತ್ಯಾತೀತ ನಿಲುವಿಗೆ ಕಟಿಬದ್ಧತೆ ಹೊಂದಿದವರು. ಸ್ವತಂತ್ರ್ಯ ಭಾರತದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣದಲ್ಲಿ ಅಮೂಲಾಗ್ರ ಕಾರ್ಯಗಳನ್ನು ಮಾಡಿದವರು. ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದ ಶಿಕ್ಷಣದ ರೂವಾರಿ. ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ಕಲಾಂರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ.   ಅಬುಲ್‍ ಕಲಾಂ ಆಜಾದ್‍ರಂತಹ ನಾಯಕರ ವಿಚಾರಗಳನ್ನು ಎಲ್ಲಿಯೂ ಓದಲು ಅವಕಾಶವಿಲ್ಲದ ಪರಿಣಾಮವಾಗಿ ಅವರ ಬಗ್ಗೆ ತಿಳಿಯುವಲ್ಲಿ ಅವಕಾಶವಂಚಿತರಾಗುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾ ಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಕರೆನೀಡಿದರು.

ಶ್ರೀ ಪ್ರಶಾಂತ್‍ರವರು ಅಬುಲ್‍ ಕಲಾಂರವರ ಶೈಕ್ಷಣಿಕ ಸುಧಾರಣೆಗಳನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿರುವವರು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. ಅವರ ಶೈಕ್ಷಣಿಕ ಚಿಂತನೆ, ಆಡಳಿತವು ಇಂದು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನಾಯಕರು ಹಾಗು ಅಧಿಕಾರಿಗಳು ಅನುಸರಿಸುವುದರಿಂದ ಶಿಕ್ಷಣದ ಪ್ರಗತಿ ಸಾಧಿಸಬಹುದಾಗಿದೆ. ಶ್ರೀಮತಿ ನೇತ್ರಾವತಿಯವರು ಮಾತನಾಡಿ ಅಬುಲ್ ಕಲಾಂ ಆಜಾದ್‍ರವರ ನಾಯಕತ್ವ ಗುಣಗಳು, ಶಿಕ್ಷಕರಿಗೆ, ಪ್ರಶಿಕ್ಷಣಾರ್ಥಿಗಳಿಗೆ ಆದರ್ಶವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಅನುದೀಪ್ ನಿರೂಪಿಸಿದರು, ಲೋಕೇಶ್ ಪ್ರಾರ್ಥಸಿದರು, ಶಿವಪುತ್ರ ಸ್ವಾಗತಿಸಿದರು, ಅರ್ಫೀನ್‍ತಾಜ್ ವಂದಿಸಿದರು. ಆಚರಣೆ ಕುರಿತು ಪ್ರಶಿಕ್ಷಣಾರ್ಥಿಗಳು ಭಾಷಣ ಮಾಡಿದರು.


Wednesday, 8 September 2021

"ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ"


 "ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ"



ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವವನೆ ನಿಜವಾದ ಶಿಕ್ಷಕ, ಹಾಗಾಗಿ ಶಿಕ್ಷಕ ದೇಶದ ನಿರ್ಮಾತೃ. ದೇಶಕ್ಕೆ ಉತ್ತಮ ನಾಗರೀಕರ ನಿರ್ಮಾಣದಲ್ಲಿ ತಾಯಿ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು.  ಭಾರತ ದೇಶದ ಶಿಕ್ಷಕ ವೃತ್ತಿಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಶ್ರಮಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಇವರ ಆದರ್ಶದಂತೆ ಇಂದಿನ ಕಲಾಘಟ್ಟದ ಶಿಕ್ಷಕರು ಮಕ್ಕಳಲ್ಲಿ ಸಚ್ಚಾರಿತ್ರ, ಸಜ್ಜನಿಕೆಯ ಹಾಗೂ ಸುಜ್ಞಾನಗಳ ಜೀವನ ಮೌಲ್ಯಗಳನ್ನು ತುಂಬಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಶಿಕ್ಷಕರ ಜವಬ್ದಾರಿಯಾಗಿದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು, ಪೀಠಾಧ್ಯಕ್ಷರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠ, ಇವರು ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ " ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದ" ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ದೇಶದ ಶಿಕ್ಷಣದ ಗುಣಮಟ್ಟ ಶಿಕ್ಷಕರನ್ನು ಅವಲಬಿಸಿದೆ, ಇಡೀ ಶಿಕ್ಷಣ ವ್ಯವಸ್ಥೆಯ ರೂವಾರಿಯೆ ಶಿಕ್ಷಕ. ಮಕ್ಕಳಲ್ಲಿರುವ ಸುಪ್ತ ಪ್ರಜ್ಞೆಯನ್ನು ಹೊರಹೊಮ್ಮುವಂತೆ ಮಾಡಿ, ಸಮಾಜಮುಖಿ ಚಿಂತನೆಯತ್ತ ನಡೆಸುವವರೇ ಶಿಕ್ಷಕರು. ಇಡೀ ಮಾನವ ಸಂಕುಲವನ್ನು ಬೆಳಕಿನಡೆಗೆ ಕೊಂಡ್ಯೊಯುವ ವೃತ್ತಿಯಲ್ಲಿ ನಿರತರಾದ ಶಿಕ್ಷಕರಿಗೊಂದು ದಿನಾಚಾರಣೆಯ ಮೂಲಕ ಗೌರವ, ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿ ತಮ್ಮ ಸೇವೆ, ಕಠಿಣ ಪರಿಶ್ರಮ, ಕ್ರಿಯಾಶೀಲತೆಯಿಂದ ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನದಂದು ಶಿಕ್ಷಕ ವೃತ್ತಿಯಲ್ಲಿರುವವರಿಗೆಲ್ಲರಿಗೂ ಗೌರವದ ಆಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಇಂತಹ ಸಾಧಕ ಶಿಕ್ಷಕರ ಆದರ್ಶಗಳನ್ನು ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 

ವಿದ್ಯಾರ್ಥಿ ಸಂಘ

ಕಾರ್ಯಕ್ರಮದ ಅತಿಥಿಗಳಾದ ಶ್ರೀಯುತ ನಿರಂಜನ ಮೂರ್ತಿಸಿ.ಎಲ್.ಡಿ.ಪಿ.ಇಡಿ ಕಾಲೇಜು ಪ್ರಾಂಶುಪಾಲರು ಮಾತನಾಡಿ, ಭಾರತೀಯ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದಾತರಲ್ಲಿ ಶಿಕ್ಷಕರ ಪರಂಪರೆ ಅಮೂಲಾಗ್ರವಾದ ಪಾತ್ರ ನಿರ್ವಹಿಸಿದೆ. ಶಿಕ್ಷಕರಾಗಿ ಕೇವಲ ಶಾಲೆಯ ಪಾಠಕ್ಕೆ ಸೀಮಿತವಾಗದೆ, ಜನತೆಯಲ್ಲಿದ ಅಂಧಕಾರವನ್ನು ಹೊಡೆದೊಡಿಸಲು ಅನೇಕರು ಶ್ರಮಿಸಿದ್ದಾರೆ. ಅಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿಗಳು ಉತ್ತಮ ಮಾರ್ಗದಲ್ಲಿ ನಡೆಯುವಂತಾಗಬೇಕು. ಬೋಧನೆಯ ಜೊತೆಗೆ ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು, ಸಾಮಾಜಿಕ ಜವಬ್ದಾರಿಯನ್ನು ಬೆಳೆಸಬೇಕು. ಕುಟುಂಬ, ಸಮಾಜದ ಸಾಮಾಜಿಕ ಹಾಗೂ ರಾಷ್ಟ್ರೀಯ ಮೌಲ್ಯಗಳ ಪಾಲನೆಯ ಅರಿವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು, ಮತ್ತೊರ್ವ ಅತಿಥಿಗಳಾದ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಶಾಲಎಸ್. ರವರು ಮಾತನಾಡಿ ಶಿಕ್ಷಕರ ದಿನದ ಶುಭಾಶಯ ಕೋರಿ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು. ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಮಾತನಾಡಿ, ವಿದ್ಯಾರ್ಥಿ ಸಂಘದ ಕಾರ್ಯ ಚಟುವಟಿಕೆ ತಿಳಿಸಿ, ಸಮಾಜ ಕಟ್ಟುವಲ್ಲಿ ಶಿಕ್ಷಕ ಪಾತ್ರವನ್ನು ತಿಳಿಸಿದರು, ಶ್ರೀಯುತ ಪ್ರಶಾಂತ್ ಕುಮಾರ್, ವಿದ್ಯಾರ್ಥಿ ಸಂಘದ ಪದಧಾಕಾರಿಗಳನ್ನು ಪರಿಚಯಿಸಿದರು, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ವಿವಿಧ ಸ್ಪರ್ಧೆಗಳಲ್ಲಿ ಜಯಶೀಲರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು, ಭುವನೇಶ್ವರಿ  ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದರು,  ಉಪನ್ಯಾಸಕರಾದ ನಂದೀಶ್ ಕೆ,  ಹಾಗೂ ಬೋಧಕೇತರ ಸಿಬ್ಬಂಧಿವರ್ಗ, ಮತ್ತು ನರ್ಸಿಂಗ್, ಪ್ಯಾರಮೆಡಿಕಲ್ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಬಿ.ಇಡಿ.ಪ್ರಶಿಕ್ಷಣಾರ್ಥಿಯಾದ ಮಲಿಹಾ ತಮ್ಕಿನ್ ನಿರೂಪಿಸಿದರು, ಪೂಜಾ ಸ್ವಾಗತಿಸಿದರು, ಮಹಾಲಕ್ಷಿ ವಂದಿಸಿದರು.

ಪ್ರಥಮ ವರ್ಷದಪ್ರಶಿಕ್ಷಣಾರ್ಥಿಗಳು


ECO CLUB ಉದ್ಘಾಟನೆ





ಪತ್ರಿಕಾ ವರದಿಗಳು

ನಳಂದ ಪತ್ರಿಕೆ



ಪ್ರಜಾವಾಣಿ


ಜನಸಾಗರ ಪತ್ರಿಕೆ



ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...